Posts

ಮಂಗಳೂರಿನಲ್ಲಿ ಮತ್ತೆ ರಕ್ತಪಾತ : ತೊಕ್ಕೊಟ್ಟು ಫ್ಲೈ ಓವರ್ ಮೇಲೆ ರೌಡಿ ಶೀಟರ್ ಬರ್ಬರ ಹತ್ಯೆ

Image
ಕಳೆದ ಹತ್ತು ತಿಂಗಳಿನಿಂದ ಮಂಗಳೂರು ನಗರ ರೌಡಿಗಳ ಹಾವಳಿಯಿಂದ ಮುಕ್ತ ವಾಗಿತ್ತು.ಆದರೆ ಮತ್ತೆ ಮಾರಕಾಸ್ತ್ರಗಳು ಝಲಪಿಸಿದೆ.ಬಿಲ ಸೇರಿದ್ದ ಪಾತಕಿಗಳು ಹೊರಬಂದು ಇವತ್ತು ರಸ್ತೆಯಲ್ಲೇ ಒಂದು ಹೆಣ ಹಾಕಿದ್ದಾರೆ.ನಸುಕಿನ ಜಾವದಲ್ಲಿ ಮಂಗಳೂರು ನಿಶ್ಶಬ್ದವಾಗಿದ್ದಾಗಲೇ ರೌಡಿಗಳು ರಕ್ತ ಹರಿಸಿದ್ದಾರೆ. ಇಂದು ಮುಂಜಾನೆ ತೊಕ್ಕೊಟು ಸೇತುವೆ ಮೇಲೆಯೇ ರೌಡಿ ಶೀಟರ್ ಒಬ್ಬನ ಬರ್ಬರ ಹತ್ಯೆ ನಡೆದಿದೆ. ಆರಿಫ್ ಹುಸೇನ್ ಅಲಿಯಾಸ್ (ಟ್ಯಾಬ್ಲೆಟ್ ಆರಿಫ್) ಕೊಲೆಯಾದ ರೌಡಿ ಶೀಟರ್, ಈತ ಮೂಲತಃ ಮಂಗಳೂರಿನ ಕುದ್ರೋಳಿ ನಿವಾಸಿ. ಸದ್ಯ ಉಚ್ಚಿಲದ ಮುಳ್ಳುಗಡ್ಡೆಯಲ್ಲಿ ವಾಸವಿದ್ದ.42 ವರ್ಷದ ಟ್ಯಾಬ್ಲೆಟ್ ಆರಿಫ್ ಮೇಲೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಇದೆ .ಈತ ಧಕ್ಕೆಯಲ್ಲಿ ಮೀನಿನ ವ್ಯಾಪಾರ ಮಾಡುತ್ತ ಇದ್ದ, ತನ್ನ ವ್ಯಾಪಾರಕ್ಕಾಗಿ ಬೈಕಿನಲ್ಲಿ ಧಕ್ಕೆಗೆ ಹೋಗುತ್ತಾ ಇದ್ದ ಸಂಧರ್ಬದಲ್ಲಿ ಕಾರಿನಲ್ಲಿ ಹಿಂಬಾಲಿಸಿ ಬಂದ ದುಷ್ಕರ್ಮಿಗಳು ಟ್ಯಾಬ್ಲೆಟ್ ಆರಿಫ್ನನ್ನ ಕೊಚ್ಚಿ ಕೊಚ್ಚಿ ಕೊಲೆ ಮಾಡಿದ್ದಾರೆ . ಆರಿಫ್ ತೊಕ್ಕೊಟು ಫ್ಲೈ ಓವರ್ ಮೇಲೆ  ತೆರಳುತ್ತಿದ್ದ  ವೇಳೆ  ಹಿಂಬದಿಯಿಂದ ಕಾರಿನಿಂದ ಡಿಕ್ಕಿ ಹೊಡೆಯಲಾಗಿದೆ. ಡಿಕ್ಕಿಯ ರಭಸದಕ್ಕೆ ರಸ್ತೆಗೆ ಬಿದ್ದ ಆರಿಫ್ನನ್ನ ದುಷ್ಕರ್ಮಿಗಳ ತಂಡ ಕಡಿದು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೃತ್ಯ ಎಸಗಿದ ಬಳಿಕ ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ...

ಮಂಗಳೂರು ಪೊಲೀಸರ ಹೆಸರಿನಲ್ಲಿ ನಕಲಿ ವೆಬ್ ಸೈಟ್ - ಜೂಜಾಟ ದಂಧೆ ಬಯಲು!

Image
  ಮಂಗಳೂರು ನಗರದಲ್ಲಿ ಸೈಬರ್ ಅಪರಾಧಿಗಳು ಮತ್ತೊಮ್ಮೆ ಹೊಸ ತಂತ್ರ ಬಳಸಿ ಜನರನ್ನು ಮೋಸಗೊಳಿಸುವ ಘಟನೆ ಬೆಳಕಿಗೆ ಬಂದಿದೆ.ಈ ಬಾರಿ ಆರೋಪಿಗಳು ಮಂಗಳೂರು ಪೊಲೀಸರ ಹೆಸರನ್ನೇ ದುರುಪಯೋಗ ಮಾಡಿಕೊಂಡು ನಕಲಿ ವೆಬ್ ಸೈಟ್ ನಿರ್ಮಿಸಿ, ಆನ್ಲೈನ್ ಜೂಜಾಟ ದಂಧೆ ನಡೆಸುತ್ತಿರುವುದು ಪತ್ತೆಯಾಗಿದೆ. ಪೊಲೀಸರ ತನಿಖೆಯಲ್ಲಿ ತಿಳಿದುಬಂದಂತೆ, ಈ ವೆಬ್ ಸೈಟ್ ಅನ್ನು ನೋಡಿದವರಿಗೆ ಅದು ನಿಜವಾದ ಅಧಿಕೃತ ಪೊಲೀಸ್ ಸೈಟ್ ಅನ್ನಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿತ್ತು.ಸಾಮಾನ್ಯ ಜನರು ಅನುಮಾನಿಸದಂತೆ ಲೋಗೋ,ಹೆಸರು ಮತ್ತು ಮಾಹಿತಿ ಎಲ್ಲವನ್ನೂ ನಕಲಿ ರೀತಿಯಲ್ಲಿ ಹೊಂದಿಸಲಾಗಿತ್ತು. ಇದೇ ಕಾರಣಕ್ಕೆ ಹಲವರು ಈ ವೆಬ್ ಸೈಟ್ ಮೇಲೆ ನಂಬಿಕೆ ಇಟ್ಟು ಹಣ ಹೂಡಿಕೆ ಮಾಡಿರುವ ಸಾಧ್ಯತೆ ಇದೆ. ಈ ನಕಲಿ ಪೋರ್ಟಲ್ ಮೂಲಕ ಜೂಜಾಟ ಹಾಗೂ ಹಣದ ವ್ಯವಹಾರಗಳನ್ನು  ನಡೆಸಲಾಗುತ್ತಿದ್ದು,ಜನರಿಂದ ಹಣ ಸಂಗ್ರಹಿಸುವುದೇ ಪ್ರಮುಖ ಉದ್ದೇಶವಾಗಿತ್ತು. ಆರಂಭದಲ್ಲಿ ಲಾಭ ತೋರಿಸಿ ಬಳಿಕ ದೊಡ್ಡ ಮೊತ್ತ ಹೂಡಿಕೆ ಮಾಡಿಸಲು ಪ್ರೇರೇಪಿಸುವ ತಂತ್ರ ಬಳಸಲಾಗುತ್ತಿದ್ದುದಾಗಿ ಶಂಕಿಸಲಾಗಿದೆ.ಇಂತಹ ರೀತಿಯ ಮೋಸ ಪ್ರಕರಣಗಳು ಮಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಹೆಚ್ಚುತ್ತಿರುವುದು ಗಮನಾರ್ಹ. ಈ ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಪೊಲೀಸರು ಕಾರ್ಯಾಚರಣೆ ಆರಂಭಿಸಿ, ಸಂಬಂಧಿಸಿದ ಜಾಲವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.ಈ ಪ್ರಕರಣದ ಹಿಂದೆ ದೊಡ್ಡ ಗುಂಪು ಕಾರ್ಯನಿರ್ವಹಿ...

ಮಂಗಳೂರಿನಲ್ಲಿ ಹೆಚ್ಚುತ್ತಿರುವ ಬಿಸಿಲು: ಇವತ್ತಿನ Weather ಅಪ್ಡೇಟ್ ಮತ್ತು ಜನರಿಗೆ ಆರೋಗ್ಯ ಎಚ್ಚರಿಕೆ

Image
ಮಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚುತ್ತಿರುವುದು ಜನರ ಗಮನ ಸೆಳೆಯುತ್ತಿದೆ ಕರಾವಳಿ ಕರ್ನಾಟಕದ ಪ್ರಮುಖ ನಗರವಾಗಿರುವ ಮಂಗಳೂರಿನಲ್ಲಿ ಸಾಮಾನ್ಯವಾಗಿ ಬಿಸಿಲು ಮತ್ತು ಆರ್ದ್ರತೆ (humidity ) ಎರಡೂ ಹೆಚ್ಚಾಗಿರುತ್ತವೆ.ಆದರೆ ಕಳೆದ ಕೆಲವು ದಿನಗಳಿಂದ ತಾಪಮಾನ ಇನ್ನಷ್ಟು ಹೆಚ್ಚಿರುವುದರಿಂದ ಜನರು ತಮ್ಮ ದಿನಚರಿಯಲ್ಲಿ ಕೆಲವು ಮುಣ್ಣೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ .ಇವತ್ತಿನ ಹವಾಮಾನ ವರದಿ ಪ್ರಕಾರ ಮಂಗಳೂರಿನಲ್ಲಿ ತಾಪಮಾನ ಸುಮಾರು 32°C ರಿಂದ 34°C ನಡುವೆ ದಾಖಲಾಗುತ್ತಿದೆ.ಇದರಿಂದ ಮಧ್ಯಾಹ್ನ ಸಮಯದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿ ಅನುಭವವಾಗುತ್ತಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳೂರಿನ ಬಿಸಿಲಿನ ಬಗ್ಗೆ ಒಂದು  ಹಾಸ್ಯಾತ್ಮಕ ಪೋಸ್ಟ್ ಕೂಡ ವೈರಲ್ ಆಗಿದೆ. ಆ ಪೋಸ್ಟ್ನಲ್ಲಿ " ಸೂರ್ಯನು ತನ್ನ ಹೊಸ ಹೆಡ್ ಕ್ವಾರ್ಟರ್ ಅನ್ನು ಮಂಗಳೂರಿನಲ್ಲಿ ಘೋಷಿಸಿದ್ದಾನೆ".  ಎಂಬ ರೀತಿಯಲ್ಲಿ ಹೇಳಲಾಗಿದೆ.ಜೊತೆಗೆ ಜನರು ಹೊರಗಡೆ ಹೋಗುವಾಗ ಛತ್ರಿ, ಸನ್ ಗ್ಯಾಸ್ ಮತ್ತು ದಿನಾಲು ಸಾಕಷ್ಟು ನೀರು ಕುಡಿಯಬೇಕು ಎಂದು ಸಲಹೆ ನೀಡಲಾಗಿದೆ. ಇದು ನಿಜವಾದ ಸುದ್ದಿ ಅಲ್ಲದಿದ್ದರೂ,ಮಂಗಳೂರಿನ ಬಿಸಿಲಿನ ತೀವ್ರತೆ ಯನ್ನು ಹಾಸ್ಯ ರೂಪದಲ್ಲಿ ತೋರಿಸುವ ಒಂದು ಕ್ರಿಯೇಟಿವ್ ಪ್ರಯತ್ನವಾಗಿದೆ.ಈ ರೀತಿಯ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಜನರ ಗಮನ ಸೆಳೆಯುದರ ಜೊತೆಗೆ ಒ...

ಬೈಕಂಪಾಡಿ ಹತ್ತಿರ ಹೈವೇ ಮೇಲೆ ಅಳವಡಿಸಿದ ಗ್ಯಾಂಟ್ರಿ ಸ್ಟ್ರಕ್ಚರ್ ಏನು? ಜನರಿಗೆ ತಿಳಿಯಬೇಕಾದ ಪ್ರಮುಖ ಮಾಹಿತಿ

Image
ಬೈಕಂಪಾಡಿ ಹತ್ತಿರದ ಹೆದ್ದಾರಿಯಲ್ಲಿ ಇತ್ತೀಚೆಗೆ ರಸ್ತೆಯ ಮೇಲೆ ದೊಡ್ಡ ಲೋಹದ ಪ್ರೇಮ್ ಮಾದರಿಯ ಒಂದು ಸ್ಟ್ರಕ್ಚರ್ ಅಳವಡಿಸಲಾಗಿದೆ. ಇದನ್ನು ಸಾಮಾನ್ಯವಾಗಿ ಹೈವೇ ಗ್ಯಾಂಟ್ರಿ ಸ್ಟ್ರಕ್ಚರ್ ಎಂದು ಕರೆಯಲಾಗುತ್ತದೆ. ಹಲವಾರು ಜನರು ಈಈ ರಚನೆಯನ್ನು ನೋಡಿ "ಇದನ್ನು ಏಕೆ ಅಳವಡಿಸಲಾಗಿದೆ?"ಅಥವಾ "ಇದರಲ್ಲಿ ಕ್ಯಾಮೆರಾ ಇದೆಯೇ?" ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದ್ದರಿಂದ ಈ ಸ್ಟ್ರಕ್ಚರ್ ಬಗ್ಗೆ ಜನರಿಗೆ ಸರಿಯಾದ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದೆ. ಹೈವೇ ಗ್ಯಾಂಟ್ರಿ ಸ್ಟ್ರಕ್ಚರ್ ಎನ್ನುವುದು ರಸ್ತೆ ಮೇಲ್ಭಾಗದಲ್ಲಿ ಅಳವಡಿಸಲಾದ ಒಂದು ಲೋಹದ ಫ್ರೇಮ್ ವ್ಯವಸ್ಥೆ. ಇದರ ಮುಖ್ಯ ಉದ್ದೇಶ ಟ್ರಾಫಿಕ್ ನಿಯಂತ್ರಣ, ವಾಹನ ವೇಗವನ್ನು ಗಮನಿಸುವುದು ಹಾಗೂ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವುದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿನ ಹಲವಾರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂತಹ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತಿದೆ. ಈ ಗ್ಯಾಂಟ್ರಿ ಸ್ಟ್ರಕ್ಚರ್ ಮೇಲೆ ಸಾಮಾನ್ಯವಾಗಿ ಟ್ರಾಫಿಕ್ ಕ್ಯಾಮೆರಾ ಸ್ಪೀಡ್ ಮಾನಿಟರಿಂಗ್ ಕ್ಯಾಮೆರಾ ಅಥವಾ ಡಿಜಿಟಲ್ ಸೈನ್ ಬೋರ್ಡಗಳನ್ನು  ಅಳವಡಿಸಲಾಗುತ್ತದೆ. ಈ ಕ್ಯಾಮರಾಗಲು ರಸ್ತೆ ಮೇಲೆ ಸಂಚರಿಸುವ ವಾಹನಗಳ ಚಲನೆಯನ್ನು ಗಮನಿಸುತ್ತವೆ. ಯಾವುದಾದರೂ ವಾಹನ ನಿಗದಿತ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಓಡಿದರೆ ಅಥವಾ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದರೆ ಅದನ್ನು ದಾಖಲು ಮಾಡುವ ಸಾಧ್ಯ...

Iran vs America ಯುದ್ಧ: ಕರ್ನಾಟಕದಲ್ಲಿರುವ ಭಾರತದ "Magic Box" ಬಗ್ಗೆ ನಿಮಗೆ ಗೊತ್ತೇ?

Image
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾದಾಗಿನಿಂದ ಜಗತ್ತಿನಾದ್ಯಂತ ತೈಲ ಮಾರುಕಟ್ಟೆ ಕಂಗಾಲಾಗುತ್ತಿದೆ.ವಿಶೇಷವಾಗಿ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದಿಂದ ತೈಲ ಬೆಲೆ ಏರಿಕೆಯಾಗಬಹುದು ಎಂಬ ಭಯ ಜಾಗತಿಕ ಮಟ್ಟದಲ್ಲಿ ಕಾಣಿಸುತ್ತಿದೆ.ನಮ್ಮ ಭಾರತವೂ ತನ್ನ ಅಗತ್ಯದ ಬಹುಪಾಲು ಕಚ್ಚಾ ತೈಲವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತದೆ.ಆದುದರಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧ ಕಾರ್ಮೋಡ ದೊಡ್ಡದಾಗಿ ಬೆಳೆಯುತ್ತಿದ್ದು ಆವಾಗ ಭಾರತಕ್ಕೆ ತೈಲ ಸರಬರಾಜು ಹೇಗೆ ನಡೆಯುತ್ತದೆ ಎಂಬ ಪ್ರಶ್ನೆ ಹಲವರಿಗೆ ಬರುತ್ತದೆ. ಆದರೆ ಬಹುತೇಕ ಜನರಿಗೆ ಗೊತ್ತಿಲ್ಲದ ಒಂದು ಪ್ರಮುಖ ವಿಷಯ ಇದೆ.ಭಾರತ ಸರ್ಕಾರ ಈಗಾಗಲೇ ತುರ್ತು ಪರಿಸ್ಥಿತಿಗಳಿಗೆ ಸಿದ್ಧವಾಗಿದ್ದು, ಭೂಗರ್ಭದಲ್ಲಿ ದೊಡ್ಡ ಪ್ರಮಾಣದ ತೈಲ ಸಂಗ್ರಹಣೆಯನ್ನು ನಿರ್ಮಿಸಿದೆ.ಈ ವ್ಯವಸ್ಥೆಯನ್ನು  S trategicPetroleumReserve  (SPR) ಎಂದು ಕರೆಯಲಾಗುತ್ತದೆ.ಇದನ್ನು ನಿರ್ವಹಿಸುವ ಸಂಸ್ಥೆ  Indian Strategic Petroleum Reserves Limited . ಸರಳವಾಗಿ ಹೇಳುವುದಾದರೆ,ದೇಶಕ್ಕೆ ತುರ್ತು ಸಂಧರ್ಭಗಳಲ್ಲಿ ತೈಲ ಪೂರೈಸುವ "ರಹಸ್ಯ ಸಂಗ್ರಹಣೆ" ಇದಾಗಿದೆ.ಕೆಲವರು ಇದನ್ನು "Oil Magic Box" ಎಂದು ಕರೆಯುತ್ತಾರೆ. ಕರ್ನಾಟಕದಲ್ಲಿ ಇರುವ ಭಾರತದ ಪ್ರಮುಖ oil reserve ಭಾರತದಲ್ಲಿ ಮೂರು ಪ್ರಮುಖ Strategic Oil Reserve  ಸ್ಥಳಗಳಿವೆ.ಅವುಗಳಲ್ಲಿ ಎರಡು ಕರ್ನಾಟಕದಲ್...

ಮಂಗಳೂರಿನ ವಾತಾವರಣದಲ್ಲಿ ಬದಲಾವಣೆ:ಮೋಡ ಕವಿದ ಆಕಾಶ, ಜನರಿಗೆ ಸ್ವಲ್ಪ ನೆಮ್ಮದಿ

Image
 ಕರ್ನಾಟಕದ ಕರಾವಳಿ ಭಾಗದ ಪ್ರಮುಖ ನಗರವಾದ ಮಂಗಳೂರು ನಲ್ಲಿ ಇತ್ತೀಚಿನ ದಿನಗಳಲ್ಲಿ ವಾತಾವರಣದಲ್ಲಿ ಸ್ವಲ್ಪ ಬದಲಾವಣೆ ಕಂಡುಬರುತ್ತಿದೆ. ಸಾಮಾನ್ಯವಾಗಿ ಬಿಸಿಲು ಮತ್ತು ಒದ್ದೆಯಾದ ಹವಾಮಾನಕ್ಕೆ ಪ್ರಸಿದ್ಧವಾಗಿರುವ ಈ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಮೋಡಕವಿದ ಆಕಾಶ ಮತ್ತು ತಂಪಾದ ಗಾಳಿ ಜನರ ಗಮನ ಸೆಳೆಯುತ್ತಿದೆ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಆಕಾಶದಲ್ಲಿ ಮೋಡಗಳು ಕಾಣಿಸಿಕೊಂಡಿದ್ದು ಗಾಳಿ ಸ್ವಲ್ಪ ಹೆಚ್ಚಾಗಿ ಬೀಸುತ್ತಿದೆ ಇದರಿಂದ ದಿನದ ವೇಳೆ ಬಿಸಿಲು ಇದ್ದರು ಕೂಡ ವಾತಾವರಣದಲ್ಲಿ ಸ್ವಲ್ಪ ತಂಪು ಕಾಣಿಸುತ್ತಿದೆ ಬಿಸಿಲಿನಿಂದ ಬಳಲುತ್ತಿದ್ದ ಜನರಿಗೆ ಈ ಬದಲಾವಣೆ ಸ್ವಲ್ಪ ನೆಮ್ಮದಿಯನ್ನು ನೀಡುತ್ತಿದೆ. ಬಿಸಿಲಿನ ನಡುವೆ ಮೋಡ ಕವಿತ ವಾತಾವರಣ  ಮಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿರುತ್ತದೆ. ಮಧ್ಯಾಹ್ನ ಸಮಯದಲ್ಲಿ ತಾಪಮಾನ ಹೆಚ್ಚು ಇರುವುದರಿಂದ ಜನರು ಹೊರಗೆ ಹೋಗಲು ಕಷ್ಟ ಅನುಭವಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮೋಡಕವಿದ ವಾತಾವರಣದಿಂದ ಬಿಸಿಲಿನ ತೀವ್ರತೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಕೆಲವೇಡೆ ಸಂಜೆ ಸಮಯದಲ್ಲಿ ತುಸುಮಲೆಯ ಲಕ್ಷಣಗಳು ಕಂಡು ಬರುತ್ತಿವೆ. ಹವಾಮಾನ ತಜ್ಞರ ಪ್ರಕಾರ ಈ ಸಮಯದಲ್ಲಿ ಸಣ್ಣ ಪ್ರಮಾಣದ ಮಲೆ ಮಹತ್ವ ಗುಡುಗು ಮಿಂಚಿನೊಂದಿಗೆ ಮಳೆಯಾಗುವುದು ಸಹಜವಾಗಿದೆ.  ರೈತರು ಮತ್ತು ಮೀನುಗಾರರಿಗೆ ಅನುಕೂಲ  ಮಂಗಳ...
Image
  ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ನೇತ್ರಾವತಿ ನದಿ ತೀರದಲ್ಲಿ ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ಆಧಾರ್ ಕಾರ್ಡ್‌ಗಳು ಪತ್ತೆಯಾದ ಘಟನೆ ಜನರಲ್ಲಿ ಆತಂಕ ಮೂಡಿಸಿದೆ. ಜನರಿಗೆ ತಲುಪಬೇಕಿದ್ದ ಈ ಮಹತ್ವದ ಗುರುತಿನ ಚೀಟಿಗಳು ನದಿತೀರದಲ್ಲಿ ಚದರಿಕೊಂಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸ್ಥಳೀಯರು ನದಿ ತೀರದಲ್ಲಿ ಸಂಚರಿಸುವಾಗ ರಾಶಿ ರಾಶಿಯಾಗಿ ಬಿದ್ದಿದ್ದ ಆಧಾರ್ ಕಾರ್ಡ್‌ಗಳನ್ನು ಗಮನಿಸಿದ್ದಾರೆ. ಕೆಲ ಕಾರ್ಡ್‌ಗಳು ನೀರಿನಲ್ಲಿ ತೇಲುತ್ತಿದ್ದು, ಇನ್ನೂ ಕೆಲವು ಮರಳಿನಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿದೆ. ಈ ಘಟನೆ ತಿಳಿದ ತಕ್ಷಣ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.  ಮನೆಗೆ ತಲುಪಿಸಬೇಕಿದ್ದ ಆಧಾರ್ ಕಾರ್ಡ್‌ಗಳನ್ನು ವಿತರಿಸುವ ವೇಳೆ ಯಾರಾದರೂ ಅಸಡ್ಡೆಯಿಂದ ತ್ಯಜಿಸಿದ್ದಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಅಲ್ಲದೇ, ಸಾಗಣೆ ಮಾಡುವ ಸಮಯದಲ್ಲಿ ಪ್ಯಾಕೆಟ್‌ಗಳು ಕಳೆದುಹೋಗಿ ನದಿಗೆ ಬಿದ್ದಿರಬಹುದಾದ ಸಾಧ್ಯತೆಯೂ ಇದೆ. ಕೆಲವು ಮಂದಿ ಇದನ್ನು ತಪ್ಪಾಗಿ ಅಥವಾ ಉದ್ದೇಶಪೂರ್ವಕವಾಗಿ ನದಿಗೆ ಎಸೆದಿರಬಹುದೆಂಬ ಶಂಕೆಯನ್ನೂ ವ್ಯಕ್ತಪಡಿಸಿದ್ದಾರೆ. ಆಧಾರ್ ಕಾರ್ಡ್ ಒಂದು ವ್ಯಕ್ತಿಯ ಅತ್ಯಂತ ಪ್ರಮುಖ ಗುರುತು ದಾಖಲೆ. ಇದು ಬ್ಯಾಂಕ್, ಸರ್ಕಾರದ ಯೋಜನೆಗಳು, ಮೊಬೈಲ್ ಸಿಮ್ ಮುಂತಾದ ಹಲವಾರು ಸೇವೆಗಳಿಗಾಗಿ ಅಗತ್ಯ. ಆದ್ದರಿಂದ ಈ ಘಟನೆ ಜನರಲ್ಲಿ ಡೇಟಾ ಸುರಕ್ಷತೆ ಬಗ್ಗೆ ಆತಂಕ ಮೂಡಿಸಿದೆ.   ಈ ಘಟನೆಯ ಕುರಿತ...